ಬೆಂಗಳೂರು -೨೩ ಎರಡನೇ ಹಂತ
Posted date: 04 Wed, Jun 2014 – 10:03:55 AM

ಕ್ರಿಕೇಟ್ ಕ್ರೀಡೆಯ ಜೊತೆಗೆ ಎರಡು ಬಡಾವಣೆಗಳ ಸುತ್ತ ನಡೆಯುವ ಘಟನೆಗಳ ಈ ‘ಬೆಂಗಳೂರು ೫೬೦ ೦೨೩’ ಚಿತ್ರೀಕರಣದಲ್ಲಿ ಎರಡನೇ ಹಂತ ಬಂದು ನಿಂತಿದೆ. ಎರಡನೇ ಹಂತದ ಚಿತ್ರೀಕರಣ ಜೂನ್ ಏರಡರಿಂದ ‘ಬೆಂಗಳೂರು ೫೬೦೦೨೩’ ಚಿತ್ರಕ್ಕೆ ಪ್ರಾರಂಭವಾಗಿದೆ ಎಂದು ನಿರ್ದೇಶಕ ಪ್ರದೀಪ್ ರಾಜ್ ತಿಳಿಸಿದರು. ಈ ಚಿತ್ರದಲ್ಲಿ ಸೆಲಬ್ರಿಟಿ ಕ್ರಿಕೆಟ್ ತಂಡದ ಕೆಲವು ಸದಸ್ಯರು ತಾರಾಗಣದಲ್ಲಿ ಇದ್ದಾರೆ. ಈ ಚಿತ್ರಕ್ಕಾಗಿ ಕ್ರಿಕೇಟ್ ಪಂದ್ಯಾವಳಿಗಾಗಿ ನಗರದ ಚೆನ್ನಮ್ಮನ ಕೆರೆ ಅಚ್ಚು ಕಟ್ಟು ಮೈದಾನದಲ್ಲಿ ಹೊನಲು ಬೆಳಕಿನ ನೈಜ್ಯತೆಯ ಸೆಟ್ ಒಂದನ್ನು ನಿರ್ಮಿಸಿ ಈ ಮೈದಾನದಲ್ಲಿ ಸತತವಾಗಿ ಆರ ದಿನಗಳ ಚಿತ್ರಣ ಸಾಗಿತ್ತು. ಅಂತಿಮ ದೃಶ್ಯದ ಚಿತ್ರಣಕ್ಕಾಗಿ ಇದೇ ಎರಡನೆ ತಾರೀಖಿನಂದು ತಂಡ ವಿಶೇಷ ಚಿತ್ರೀಕರಣ ಹಮ್ಮಿಕೊಂಡಿದೆ.

ಕರ್ನಾಟಕ ಬುಲ್‌ಡೋಜರ್ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ತಂಡದ ನಟರುಗಳಾದ ಜೆ ಕೆ, ರಾಜೀವ್, ಚಂದನ್, ಧ್ರುವ ಶರ್ಮ ಜೊತೆಗೆ ಸಂಜನ, ಶಿವಾನಿ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಈ ಚಿತ್ರದ ನಿರ್ಮಾಪಕರುಗಳು ಪುನೀತ್ ಹಾಗೂ ಮನು.

ಅರುಣ್ ಅವರ ಸಂಗೀತ ಈ ಚಿತ್ರಕ್ಕಿದೆ. ಕವಿರಾಜ್, ಶೈಲೇಶ್ ಹಾಗೂ ನಿರ್ದೇಶಕ ಪ್ರದೀಪ್ ರಾಜ್ ಅವರು ಗೀತ ಸಾಹಿತ್ಯ ಒದಗಿಸಿದ್ದಾರೆ. ಧರಣಿ ಅವರು ಈ ಚಿತ್ರದ ಛಾಯಾಗ್ರಾಹಕರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed